Wednesday 13 May 2009

Towards Comment by Saadhana

ಭಾರತೀಯ ಪರಂಪರೆಯಲ್ಲಿ ವಿದ್ಯೆಗಳದ್ದೇ ದೊಡ್ಡ ಕೋಶವಿದೆ. ಒಂದೊಂದು ವಿದ್ಯೆಯೂ ಗಹನವಾದ ನಿಘಂಟಿನಂತಿದೆ. ಪರಂಪರೆಯಲ್ಲಿ ಬರುವ ವಿದ್ಯೆಗಳೆಲ್ಲಾ ಅಕ್ಷರ ಜೋಡನೆಗಳಿಂದ ಮಂತ್ರವತ್ ರೂಪದಲ್ಲೇ ಇರುತ್ತವೆ. ಕವನದಲ್ಲಿ ಬಂದ ಮಧುವಿದ್ಯೆ ಅಂತವುಗಳಲ್ಲಿ ಒಂದು. ಇಲ್ಲಿ ಆತ್ಮಭಾವವನ್ನು ಜಾಗೃತಗೊಳಿಸುವ ಸಾಧನವಿದೆ. ದೃಷ್ಟಾರರು ಜೀವಿಗಗೊಳಗೆ ಹೃದಯ ಹೃದಯಗಳ ನಡುವಿನ ಸ್ನೇಹಭಾವವನ್ನು ದರ್ಶಿಸಿಕೊಂಡು ಸಾಕ್ಷೀಭಾವವನ್ನು ಸಾಧಕಗೊಲಿಸುವ ಸಿದ್ಧಿಯತ್ತ ಸಾಧಕನನ್ನು ಒಯ್ಯುವ ಯತ್ನವನ್ನು ಮಾಡುತ್ತಾರೆ. ಮಧು ಸ್ನೇಹದ ಸಂಕೇತ. ಇಲ್ಲಿ ಸ್ನೇಹ ಏಕೀಭಾವದಲ್ಲಿ ಆತ್ಮಭಾವದಲ್ಲಿ ಹೃದಯಕ್ಕೆ ಸ್ಥಾನವನ್ನು ಈಯುತ್ತದೆ. ತಲೆಗೆ ಬುದ್ಧಿಗೆ ಸ್ಥಾನ ಅಮುಖ್ಯವೆನಿಸುತ್ತದೆ. ಇದು ಭಾರತೀಯ ವಿದ್ಯೆಯ ಒಂದು ಸೊಗಸು.

No comments:

Post a Comment