Wednesday 13 May 2009

ಈ ಮಧುವಿದ್ಯೆ

ಎಲ್ಲೆಲ್ಲೂ ಎಲ್ಲರೂ ಇದ್ದಾರೆ
ಇನ್ನೆಲ್ಲೆಲ್ಲೋ
ಯಾರೊಬ್ಬರೂ ಯಾರೊಂದಿಗೂ
ಮಿಲನ ಆಗುತ್ತಿಲ್ಲ
ಯಾರು ಯಾರ ಮನೆಗೆ ಹೋದರೂ
ಅಲ್ಲಾರೂ ಇರುವುದಿಲ್ಲ
ಯಾರು ಯಾರೊಬ್ಬರ ಕೈಯನ್ನೇ ಹಿಡಿದರೂ
ಅವರಿವರಾರೂ ಅಲ್ಲಿ ಇರುವುದಿಲ್ಲ
ಯಾರೋ ಯಾರದೋ ಹೃದಯಸ್ಪರ್ಶಿಸಿದರೂ ಯಾರೂ
ಯಾರದೋ ತಲೆಯ ಮೇಲೆಯೇ ಕೈ ಇಟ್ಟಂತಾಗುವುದು
ಹೃದಯದಲ್ಲಾರನ್ನೂ ಕಾಣಲಾಗದೆ
ಎಲ್ಲರೂ ಎಲ್ಲರಿಗೂ ತಲೆಯಲ್ಲೇ ಎದುರಾಗುವರು
ಆಗ ಎಲ್ಲರೂ ಇನ್ನೇನನ್ನೋ ಇನ್ನೆಲ್ಲೆಲ್ಲೋ
ಅರಸರಸುತ್ತಾ ಹೋಗುತ್ತಲೇ ಇರುತ್ತಾರೆ
ಯಾರೊಬ್ಬರಿಗೂ ಮಿಲನದ ಸುಖವಿಲ್ಲ
ಅಯ್ಯೋ ಮಿಲನವಾಗಲು ಆಗುತ್ತಿಲ್ಲೆನೇನೋ ಕಾರಣಗಳಿಗಾಗಿ ಹುಡುಕುತ್ತಾರೆ
ನೋಡುತ್ತಾರೆ ದುಃಖದ ಮಡುವುಗಳನ್ನೇ
ಸುಖದ ಆಸೆಗಳು ಬಂಧಿಸುತ್ತಲೇ ಇರುತ್ತವೆ
ಆಸೆಗಳೆಲ್ಲಾ ಮುರಿದು ಬೀಳುತ್ತಲೇ ಇರುತ್ತವೆ

ಪರರಿಂದೇನು ಸಿಕ್ಕೀತು ದುಃಖವೊಂದನ್ನು ಬಿಟ್ಟು
ಸಿಗಲಾರದು ಸುಖವೂ
ಆಗಬೇಕಾದವರು ನೀವು ಪರರಲ್ಲ
ಪರರು ಆಗಬೇಕಾದಲ್ಲಿ ನೀವಲ್ಲ ಆಗಬೇಕಾದವರು
ನೀವಾಗಿ ನೀವಾಗಿ ನೀವಾಗಿ
ನೀವಾಗಿ ಪರರು
ಇದೇ ಈ ಮಧುವಿದ್ಯೆ ಮಣ್ಣಿನ ವಿದ್ಯೆ.....

1 comment:

  1. The poem gave a good reading. It was full of starkest realities of life. By the time the verse was to conclude the concept of "Madhuvidya" crept in. Poem abruptly stopped with the "vidya of soil." It was actually the title of the poem. The thread linking the "Madhuvidya" to the verse was not explicit. Kindly throw light.

    ReplyDelete