ಆತ್ಮವು ಆಂತರ್ಯದ ಒಳಗಿನೊಂದು ದರ್ಪಣದಂತೆ. ಇದು ಸ್ವಚ್ಚ ಶುದ್ಧವಾಗಿದ್ದಲ್ಲಿ ಮನಸ್ಸಿನ ಯಾವ ಚಿತ್ರಗಳ ಪ್ರತಿಬಿಂಬಗಳು ದರ್ಪಣದಲ್ಲಿ ಮೂಡಿದರೂ ದರ್ಪಣಕ್ಕೆ ಅಂಟಿಕೊಳ್ಳಲಾಗದು . ಅಂಟಿಕೊಳ್ಳದೆ ಇದ್ದಾಗ ಒಳಗೆ ಯಾವ ಗಂಟೂ ಸಿಕ್ಕೂ ಇರಲಾರದು.
ಮನಸ್ಸಿನ ವಾಸನೆಗಳೊಂದಿಗೆ ಆತ್ಮವೋ ಬ್ರಹ್ಮವೋ ಬಂಧಿಯಾಗಿದ್ದಾಗ ಮಾತ್ರವೇ ಸಂಸಾರ. ಮನಸ್ಸಿನ ವಾಸನೆಗಳಿಂದ ಮುಕ್ತರಾದಾಗ ಸಂಸಾರದಿಂದ ಮುಕ್ತರು. ಸಂಸಾರದಲ್ಲಿಯೇ ನಾವಿದ್ದರೂ ಜೀವನ್ಮುಕ್ತರಂತೆ ಇರಬಹುದು.
Wednesday 6 May 2009
Subscribe to:
Post Comments (Atom)
No comments:
Post a Comment