Thursday 11 June 2009

ದೇವರು

ದೇವರ ಅಸ್ತಿತ್ವವೆಂದರೆ ಉಪಸ್ಥಿತಿ ಅನುಪಸ್ಥಿತಿಯಂತೆ ಅನುಪಸ್ಥಿತಿಯೇ ಉಪಸ್ಥಿತಿಯಂತೆ.

ದೇವರು ಎಲ್ಲೂ ಕಾಣದಿರುವುದರಿಂದಲೇ ಎಲ್ಲೆಲ್ಲೂ ಇದ್ದಾನೆ. ಇರದ ಎಂದು ತಾಣವೂ ಇಲ್ಲ.

ನಿನ್ನನ್ನೇ ಎಲ್ಲೆಲ್ಲೂ ಕಾಣುವ ಭಕ್ತನಿಗೆ ನೀನೆಲ್ಲೂ ಕಾಣುವುದಿಲ್ಲ. ನಿನ್ನಂತೆ ಅವನು ರೂಪರಹಿತನಾದರೆ ಅವನೂ ಎಲ್ಲೂ ಕಾಣುವುದಿಲ್ಲ. ನಮ್ಮೊಳಗಿನ ಈ ಆಂತರಿಕ ಸಂವಾದ ಏನು?

ಹುಡುಕಿ ಹುಡುಕಿ ನಾನು ನನ್ನನ್ನೇ ಕಳೆದುಕೊಂಡು ಬಿಟ್ಟೆ. ಅವನು ಸಿಕ್ಕೇ ಬಿಟ್ಟ.
ಹುಡುಕು ಸಿಗೋಲ್ಲ. ಹುಡುಕಬೇಡ ಸಿಗುತ್ತೆ. ಯಾಕೆ ಗೊತ್ತಾ?
ಅದು ಅಲ್ಲೇ ಈಗಲೇ ಇದೆ. ಭಕ್ತನೆಲ್ಲಿದ್ದಾನೆ ಅಲ್ಲಿಲ್ಲ ದೇವರು. ಭಕ್ತನೆಲ್ಲಿ ಇಲ್ಲವೊ .. ಅಲ್ಲೇ ಇದ್ದಾನೆ ದೇವರು.

ಭಕ್ತನಿಗೆ ತಿಳಿದಿದೆ ನಾನಿದ್ದಲ್ಲಿ ದೇವನಿರುವುದಿಲ್ಲವೆಂದು ಅದಕ್ಕೆ ದೇವರನ್ನು ಇಟ್ಟಿದ್ದಾನೆ ಮೂರ್ತಿಯೊಳಗೆ.
ಪರಮಾತ್ಮನೇನೋ ದೂರದಲ್ಲಿದ್ದಾನಂತೆ, ಇಲ್ಲೇನಿದೆ? ಈಗೇನು?
ಪರಮಾತ್ಮ ಸ್ವರೂಪ ಒಬ್ಬ ಕವಿ ಹೊರಡಿಸುವ ಅಹಂಕಾರ ರಹಿತ ಕವಿತೆ.
ಅದು ಹೇಗೆ ರಾತ್ರಿಯಲ್ಲೂ ಕರುಣೆಯ ಬೆಳಕು ಬೆಳಗುತಿರುವುದೋ ನಿರಂತರ?
ಏನಿದು ಕೊತ್ತದ್ದರ ಹತ್ತು ಪಟ್ಟು ಬಿತ್ತಿಕೊಡುವ ಮೊಳೆಯುವ ಈ ಹನಿಬೀಜ?
ಎಂತೋ ಸಾಗರವಾಯಿತಲ್ಲ....!

ಚಿತ್ತದಾಳದ, ಕಮಲನಾಳದ, ಅತ್ಯಾಳದ ಭಾವ ಭಾವೈಕ್ಯತೆಯೇ ಪರಮಾತ್ಮ.

ಅಸ್ತಿತ್ವ ನನ್ನನ್ನು ಪ್ರೇಮಿಸುತ್ತದೆ ಹೂವಿನಂತೆ. ಹೂವಿನ ಮೇಲೆರಗುವ ಇಬ್ಬನಿಯಂತೆ. ಆಕಾಶವನೇ ಹೊಡೆಯುವಂತೆ. ನೀರು ಹರಿದಂತೆ, ನಿರ್ಮಲ.
ಅವಕಾಶವೆಂದರೆ ಅಸ್ತಿತ್ವ, ಅದು ಇಲ್ಲಿ ಈಗ.
ಎಲ್ಲವನ್ನು ಹೇಳಬಲ್ಲ ಆ ಒಂದು ಸಾಲು ಮರೆತೇ ಹೋಗಿದೆ, ಹೇಗೆ ಹೇಳಲಿ ಅದನು.
ಎಂತ ವಿಸ್ಮಯ, ಏನು ಅದ್ಭುತ?
ಅಬ್ಬಾ ರಹಸ್ಯವೇ, ಇದೊರಳಗೆ ವಿವೇಕ...
ರವಿ ಮೂಡುತಿದೆ.. ಹಕ್ಕಿ ಹಾಡುತಿದೆ.. ಹೂ ಅರಳುತಿವೆ..ತಾರೆಗಳು ಮಿನುಗುತಿವೆ.. ಚಂದ್ರ ಹಾಲು ಚೆಲ್ಲುವ.. ಜೀವನವೆಲ್ಲಾ ಆನಂದ ಪುಲಕಿತ..
ಅತೀತ ಪಶುತ್ವ.
ಭವಿಷ್ಯ ಪರಮಾತ್ಮ.
ನಡುವೆ ಮನುಷ್ಯತ್ವ.
ಅದ್ಭುತ ಪ್ರಕಾಶದ ಸಾಧ್ಯತೆ.. ಮನುಷ್ಯ.

No comments:

Post a Comment