ಧರ್ಮ ಎಂಬುದೊಂದಿದ್ದರೆ ಮಾತ್ರ ಜೀವನದಲ್ಲಿರುವುದು ಸಾಧ್ಯ. ವ್ಯರ್ಥವಾದ ಊಹಾಪೋಹಕ್ಕೂ ಧರ್ಮಕ್ಕೂ ಅನ್ಯಥಾ ಸಂಬಂಧ ಇರಲಾರದು.
ಆತ್ಮವು ಒಂದು ಚೈತನ್ಯ; ಚೇತನ.
ವಿಚಾರಗಳಿಂದ ಸಿದ್ಧಾಂತಗಳಿಂದ ಮುಕ್ತವಾಗಿರುವ ಚೇತನವೇ ಧಾರ್ಮಿಕ ಚೇತನ.
ಧಾರ್ಮಿಕ ಚಿತ್ತ ಕಾಲ್ಪನಿಕ ಚಿತ್ತವಲ್ಲ.
ಭಯಕ್ಕೂ ಧರ್ಮಕ್ಕೂ ಸಂಬಂಧವಿಲ್ಲ; ಭಯಕ್ಕೂ ದೇವರಿಗೂ ಸಂಬಂಧ.
ಧಾರ್ಮಿಕರ ಕೈಯಲ್ಲಿ ಇಲ್ಲ ಧರ್ಮ.
ಧರ್ಮ ಎಂದರೆ ಅಭಯ. ಧರ್ಮ ಎಂದರೆ ಎಲ್ಲ ಭಯಗಳಿಂದ ವಿಮೋಚನೆ.
ಧರ್ಮವು ನಂಬಿಕೆಯಲ್ಲ.
ಧರ್ಮವು ಕುರುದುತನವಲ್ಲ. ಕಣ್ಣುಗಳ ಸೂಕ್ಷ್ಮತೆ.
ಶೋಷಣೆಯ ಪ್ರಕ್ರಿಯೆಗೆ ವಿವೇಕವಾಗಲೀ ಶ್ರದ್ಧೆಯಾಗಲೀ ತೊಂದರೆಯೇ ಸರಿ. ಧರ್ಮವು ಇದಕ್ಕೆ ಅಡ್ಡಿ, ಆತಂಕವೇ.
ಯಾವಾಗ ಧರ್ಮವು ವಿವೇಕ ಎಂಬ ಅಗ್ನಿಯಲ್ಲಿ ಮಿಳನವಾಗುತ್ತದೋ ಆಗ ಸ್ವಾತಂತ್ಯ್ರ ಮತ್ತು ಶಕ್ತಿಯ ಜನನವಾಗುತ್ತದೆ.
ಧರ್ಮವು ಆಗ ಬಳಶಾಲಿಯಾಗಿರುತ್ತದೆ. ಆಗ ವಿಚಾರದಿಂದ ಶಕ್ತಿ ಇದೆ.
ಧರ್ಮವು ಬೆಳಕು. ಪ್ರಜ್ಞೆಯ ಪ್ರಕಾಶ.
ಧರ್ಮವು ಮುಕ್ತಿ ಕೂಡಾ. ಯಾಕೆಂದರೆ ವಿವೇಕವೇ ಮುಕ್ತ.
Monday 8 June 2009
Subscribe to:
Post Comments (Atom)
No comments:
Post a Comment